ಶ್ರೀ ಸಾಯಿ ವೆಂಕ್ಚರ್ಸ್ ಲಾಂಛನದಲ್ಲಿ ನಾಗರಕಟ್ಟೆ ಚಿತ್ರದ ಚಿತ್ರೀಕರಣ ತಾವರೆಕೆರೆಯ ಭೂತಬಂಗಲೆಯಲ್ಲಿ ನಿರ್ಮಿಸಿದ್ದ ಸೆಟ್ನಲ್ಲಿ ಅನಿಶ್, ಸುಚೀಂದ್ರ ಪ್ರಸಾದ್, ಹೊಡೆದಾಟದ ದೃಶ್ಯಗಳು ದ್ವಾರಕೀಶ್ ಅವಿನಾಶ್, ಶರತ್ ಲೋಹಿತಾಶ್ವ ರವರ ಮಾತಿನ ಭಾಗದ ಚಿತ್ರೀಕರಣ ಹಾಗೂ ಶ್ರಾವ್ಯ ಅವಿನಾಶ್ ಅಭಿನಯಿಸಿದ ದೃಶ್ಯ ಚಿತ್ರೀಕರಣವಾದವು. ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಸೆಟ್ಟೆಲ್ಲಾ ಹಾನಿಯಾಗಿದ್ದು, ಈಗ ಪುನರ್ ನಿರ್ಮಾಣ ಮಾಡಿ ಚಿತ್ರೀಕರಣ ಸಾಗುತ್ತಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ - ಶಂಕರ್, ಇವರು ಈ ಹಿಂದೆ ೧೮ನೇ ಕ್ರಾಸ್ ಚಿತ್ರ ನಿರ್ದೇಶಿಸಿದ್ದರು, ಚಿತ್ರದ ಛಾಯಾಗ್ರಹಣ-ಸುರೇಶ್ ಬಾಬು, ಸಂಗೀತ- ಅರ್ಜುನ್ ಜನ್ಯ, ಸಾಹಿತ್ಯ- ಯೋಗರಾಜಭಟ್, ಕೆ. ಕಲ್ಯಾಣ್, ಸಂಕಲನ- ವಿಕಯ್ ಎಂ ಕುಮಾರ್, ನೃತ್ಯ - ಮದನ್ ಹರಿಣಿ, ಕಲೆ-ಮುರಳಿ, ಸಾಹಸ -ವಿಕ್ರಮ್, ಸಹನಿರ್ದೇಶನ - ಉಮೇಶ್.ಎಸ್.ಎಸ್, ಸಹಾಯಕರು-ಕಷ್ಟಾರ್ಜುನ, ಗಿರೀಶ್, ಕಲೆ-ಆನಂದ್, ನಿರ್ವಹಣೆ-ಸುಂದರಂ, ತಾರಾಗಣದಲ್ಲಿ - ಅನೀಶ್ ತೇಜೇಶ್ವರ್, ನಿಹಾರಿಕಾ, ಶ್ರಾವ್ಯ, ದ್ವಾರ್ಕೀಶ್, ಅವಿನಾಶ್, ಶರತ್ ಲೋಕಿತಾಶ್ವ, ಚಿಕ್ಕಣ್ಣ, ಗಿರಿ ದಿನೇಶ್, ರಾಕ್ ಲೈನ್ ಸುಧಾಕರ್, ಕರಿಸುಬ್ಬು, ಮಿಮಿಕ್ರಿ ದಯಾನಂದ್, ಸುಚೇಂದ್ರ ಪ್ರಸಾದ್, ಮುಂತಾದವರಿದ್ದಾರೆ.